

ಬಾಗಿಲೊಳು ನಿಂತಿತ್ತು ನವ ವಸಂತ
ಸೊಂಪಾಗಿ ಬೀಸಿತ್ತು ತಂಪಾದ ಮಾರುತ
ತಂದಿತ್ತು ಮನಕೆ ಆಹ್ಲಾದ ಚೈತನ್ಯ
ಮಾಡಿತ್ತು ಎಲ್ಲ ದುಗುಡವನು ಶೂನ್ಯ
ಇಹವನು ಮರೆತು ಮನಸದು ಓಡಿತ್ತು
ಮುಂಬರುವ ಗ್ರೀಷ್ಮದ ತಾಪಕೆ ಹೆದರಿತ್ತು
ಹೇಗೆ ತಾಳುವುದು ವಿರಹದ ಬೇಗೆಯನು
ಎಂದು ಮಾಡಿತು ಈಗಲೇ ಚಿಂತೆಯನು
ವರ್ಷದ ನೆನಪಾಗಿ ಕನಸೊಂದು ಮೂಡಿತು
ಅರಳಿತು ಮನಸು ಸಂಗಮವ ನೆನೆದು
ಬಯಕೆ ಅತಿಯಾಯ್ತು ಜೋರಾಗೋ ಮಳೆಯಂತೆ
ಒಂದಾಗಿ ಹೋಗಲು ಸುರಿಮಳೆಯ ಜೊತೆ
ಮತ್ತೆ ಮನದಂಗಳದಿ ಬರುವವನು ಶರತ
ಎಲ್ಲವನೂ ಉದುರಿಸಿ ಆಗುವನು ಸಂಪ್ರೀತ
ಹೇಮಂತ ಕಾಲಿಡಲು ತಂಪನೆಯ ತಂಗಾಳಿ
ತನುಮನಕೆ ಹಿತ ತರುವ ಕುಳಿರ್ಗಾಳಿ
ಶಿಶಿರನು ಬರಲು ಎಲ್ಲೆಡೆಯೂ ಇಬ್ಬನಿ
ಕೇಳುವನು ಮನದ ಪ್ರೀತಿಯ ಇನಿದನಿ
ಮತ್ತೆ ಬರುವನು ಇದೇ ವಸಂತ
ತರುವನು ಮತ್ತದೇ ಭರಪೂರ ಸಂತಸ
ಎಣಿಕೆಯು ನಡೆದಿತ್ತು ಆಕೆಯ ಮನದಿ
ಫಲಿಸೀತೆ ಆಸೆ ಮುಂದಿನ ವಸಂತದಿ
ಕಾಯುತಿಹಳು ಆ ಸ್ತ್ರೀ-ಧಾರಿಣಿ
ಕಾಲ ಪುರುಷನ ಪ್ರೀತಿಯ ರಮಣಿ
ದಿವ್ಯ,
ReplyDeleteನವ ವಸಂತನ ಆಗಮನವನ್ನು ಸ್ವಾಗತಿಸಲು ಹೊರಟಿದ್ದೀರಿ...
ಚೆನ್ನಾಗಿದೆ, ಪ್ರತಿ ಸಾಲಿನಲ್ಲೂ ಹೊಸತನದ ಪ್ರಯೋಗವಿದೆ. ಮುಂದುವರೆಯಲಿ ಕವನಗಳ ಹರಿವು, ಮತ್ತೆ ಭಾವ ಜೀವ ತಳೆಯಲಿ ಇನ್ನಷ್ಟು ಮತ್ತಷ್ಟು ಸಾಲುಗಳಾಗಿ.
chennaagide
ReplyDeleteಭಾವನೆಗಳು ಇದೇ ರೀತಿ ಉಕ್ಕಿ ಹರಿಯುತಿರಲಿ.
ReplyDeleteಕವನ ತುಂಬಾ ಚನ್ನಾಗಿದೆ... ನಾನು ಪ್ರೈಮರಿ ಸ್ಕೂಲ್ ಓದುವಾಗ ಹಿಂದಿ ವಿಷಯದಲ್ಲಿ ಇದೆ ರೀತಿಯ ಎಲ್ಲ ಋತುಗಳನ್ನು ವರ್ಣಿಸುವ ಪದ್ಯವೊಂದು ಇತ್ತು. ನಿಮ್ಮ ಕವನ ಓದಿ ಅದರ ನೆನಪಾಯಿತು. ಪದಗಳ ಜೋಡಣೆ ಖುಷಿ ತಂದಿತು.. ಹೀಗೆ ಬರೆಯುತ್ತಿರಿ.
ReplyDeleteಶರಶ್ಚಂದ್ರ ಕಲ್ಮನೆ
ದಿವ್ಯಾ...ನಮಸ್ತೆ.
ReplyDeleteನೀವು ಚೆನ್ನಾಗಿ ಬರೇತೀರಿ..ತುಂಬಾ ಮುಗ್ಧವಾಗಿ ಋತುಗಳ ವರ್ಣನೆ ಮಾಡಿದ್ದೀರಿ. ಧನ್ಯವಾದಗಳು. ಓದಕ್ಕೆ ನಾವಿದ್ದೀವಿ. ಶುಭವಾಗಲೀ.
-ಧರಿತ್ರಿ
ಕವನ ಮೆಚ್ಚಿ ಪ್ರತಿಕ್ರಿಯಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು..
ReplyDelete-ದಿವ್ಯಾ